ಸ್ವರಚಿತ ಕವನಗಳು

ಸ್ವರಚಿತ ಕವನಗಳು

Tuesday, July 03, 2007

ಕಾಂಬೆವು ದೇವರು

ದಿನವೂ ಬೆಳಕಿನತ್ತ
ಮುಖ ಮಾಡಿ
ಏಳುವವರು ನಾವು
ಇರುಳು ಸ್ವಸ್ಥರಾಗಿ
ನಿದ್ರಿಸಲು ಇಚ್ಛಿಸುವವರುನಾವು.

ಎಷ್ಟೋ ಸಲ ಇನ್ನೊಬ್ಬರ ಕಷ್ಟಕ್ಕೆ
”ಅಷ್ಟೇ ಎನ್ನುವವರು
ಅಷ್ಟೇ ಬಾರಿ ನಮ್ಮದೇ ಕಷ್ಟಕ್ಕೆ
”ಅಬ್ಬಾ ಎಂದುಸುರುವವರು
ನಿಡುಸುಯ್ಯುವವರು ನಾವು.

ದಿನವೂ ಭವಿಷ್ಯದತ್ತ
ನಿಟ್ಟಿಸಿ ಸುಖದ ಚಿಂತೆ ಮಾಡುವವರು
ಕ್ಷಣವೂ ವರ್ತಮಾನದಲಿ
ಯಾವ ನೋವೂ ಇರಲೊಲ್ಲದವರು.

ದಿನವೂ ಏನೇ ಆಗಲಿ-ಬಿಡಲಿ
ಹೊರಗಿನ ಗೋಳಿಗೆ
”ಅನಿಷ್ಟ” ಎನ್ನುವವರು
ಮನೆಯೊಳಗಿನ ದುಃಖಕೆ
”ಅಯ್ಯೋ” ಎಂದೊರಲುವವರು.

ದಿನವೂ ಆಸೆಗಳ ಹೊತ್ತು
ಹೊಸ ಬದುಕನರಸುತ್ತಲೆ
ಉತ್ಸುಕರಾಗುವೆವು;
ಸೋತಾಗಲೂ ನಗ ಬಲ್ಲವರು!
ಅರಿತಾಗಲೆ ನಾವು ಮನುಜರು
ಬೆರೆತು ಒಂದಾದಾಗಲೇ
ನಾವು ಕಾಂಬೆವು ದೇವರು.
-ಎಚ್.ಶಿವರಾಂ
ಮಂಗಳ ವಾರ ಪತ್ರಿಕೆ ಯಲ್ಲಿ ಪ್ರಕಟಿತ- ೦೨-೦೯-೧೯೯೨

1 comment:

Unknown said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com