ಸ್ವರಚಿತ ಕವನಗಳು

ಸ್ವರಚಿತ ಕವನಗಳು

Wednesday, September 20, 2017

ಅಹಂಕಾರವಿಲ್ಲ ಎನ್ನುವುದೂ
ಅಹಂಕೃತಿಯ ಲಕ್ಷಣವೆ
ಅಹಂಕಾರವಿಲ್ಲದ ಮನುಷ್ಯನಿಗೆ
ತನಗೇನೂ ತಿಳಿದಿಲ್ಲವೆಂಬ
ವಿನೀತ ಭಾವವಿರುತ್ತದೆ
ಅಂತಃ ಸತ್ವವನ್ನರಿಯಲು
ಧರ್ಮಗ್ರಂಥಗಳನ್ನು ಓದಿದಷ್ಟೂ
ಓದಬೇಕೆನಿಸುತ್ತದೆ
ಉತ್ತಮ ಪುಸ್ತಕಗಳನ್ನು ಓದಿದಷ್ಟೂ
ಪ್ರಪಂಚಜ್ಞಾನ ವಿಸ್ತ್ರತವಾಗುತ್ತದೆ
ಪೂರ್ವಾ ಪರ ವಿಮರ್ಶೆ ಬೆಳೆಯುತ್ತದೆ
ಮನುಷ್ಯ ಮನೋಬುದ್ಧಿಗಳಾಚೆ
ಪರಾತ್ಪರ ತತ್ವವೊಂದಿದೆ ಎಂಬ
ಅತೀವ ವ್ಯಾಕುಲ ಭಾವದಲ್ಲಿ
ದೇವ ಮಂದಿರವನ್ನು ಪ್ರವೇಶಿಸಿದರೆ
ಪರಮಾತ್ಮನ ದರ್ಶನದಲ್ಲಿ ಮೋಕ್ಷದ ಪರಮಾರ್ಥ ಅವನ ಅರಿವಿಗೆ ಬರುತ್ತದೆ
ಕೊನೆಯುಸಿರಿನಲ್ಲಿ ಜವನ್ಮುಕ್ತಿ
ದೊರೆಯುತ್ತದೆ.
-ತ್ರಿಗುಣಾತ್ಮಕ ಪ್ರಪಂಚ.
೨೦-೦9-೨೦೧೭